ಆಗಸದ ತೂತು | ಸಂಚಿಕೆ ೧೨ - ಭಾರತ ಸಂಚಾರ
ಇಂಟರಾಗೇಶನಲ್ಲಿ ಗೋಪುಟ್ಟನ ಸ್ಟೇಟ್ಮೆಂಟು ಪ್ರಥಮ ಪುರುಷ ದೃಷ್ಟಿಕೋನದಲ್ಲಿರೋದ್ರಿಂದ (ನಾನು ಇಂಗ್ಲಿಷ್ ಪದಗಳ ಬಳಕೆ ಮಾಡೋದಕ್ಕೆ ಆಕ್ಷೇಪ ವ್ಯಕ್ತಪಡಿಸೋರು ಇದೆಂಥದು ಅಂತ ಕೇಳ್ಬಾರ್ದು. ಆದ್ರೂ ಎಲ್ಲರಿಗೂ ಅರ್ಥ ಆಗ್ಲಿ ಅಂತ ಹೇಳ್ತಿದೀನ, first person POV or point of viewನಲ್ಲಿರೋದ್ರಿಂದ ಅಂತ ಓದ್ಕೊಳಿ) ಪೂರ್ತಿ ಕತೆ ಕೂಡ ಕತೆ ಹೇಳೋನ ದೃಷ್ಟಿಕೋನದಲ್ಲಿ ಇರೋದ್ರಿಂದ (which is also in first person POV) ಓದುವಾಗ ಗೊಂದಲ ಉಂಟಾಗ್ಬೋದು. ಹಂಗಾಗಿ ಇಂಟರಾಗೇಶನ್ ಪಾರ್ಟನ್ನು ಗೋಪ್ಪುಟ್ಟನ point of viewದಲ್ಲಿ ಬರೀತಿದೀನಿ. ಇಂಟರಾಗೇಶನ್ ಭಾಗದಲ್ಲಿ 'ನಾನು' ಅಂದ್ರೆ ನರೇಟರ್ ಅಲ್ಲ, ಗೋಪುಟ್ಟ ಎಂದು ಅರ್ಥೈಸಿಕೊಳ್ಳಿ. ಅಲ್ಲೆಲ್ಲೂ ನರೇಟರ್ ಇಣುಕೋದಿಲ್ಲ ಇನ್ನು ಮುಂದೆ. ಇದಕ್ಕೆ narrator shift ಅಂತಾನೂ ಕರೀಬೋದು. ಮನಾಲಿಯಿಂದ ಗೋಪುಟ್ಟನ ಗ್ಯಾಂಗ್ ಹೊರಟ ನಂತರದ ಟೈಮ್ಲೈನಿನ ಹಲವಾರು ಘಟನೆಗಳಲ್ಲಿ ಹೇಳದಿದ್ರೆ ಆಗೋದೇ ಇಲ್ಲ ಅನ್ಸಿದ ಘಟನೆಗಳನ್ನಷ್ಟೇ ಗೋಪುಟ್ಟನ ಬಾಯಲ್ಲಿ ಕೇಳಿ. ----------------------------***------------------------- ಮನಾಲಿಯನ್ನು ತೊರೆದ ಐದನೇ ದಿನ, ಜೂನ್ ೪, ೨೦೨೧ ಸೆತ್ಲೆಜ್ ತೀರದಿಂದ ನಮ್ಮ ಕಾರವಾನ್ ವಾಪಸ್ಸು ಬರದೇ ಚಂಡಿಘಡ, ಕುರುಕ್ಷೇತ್ರ, ಪಾಣಿಪತ್ ಮೂಲಕ ಸಾಗಿ ಎನ್.ಎಚ್. ೪೪ರನ್ನು ಬಳಸಿ ಚೆನ್ನೈ ಕಡೆ ಹೋಗೋಕೆ ಸಿದ್ಧವಾಗಿತ್ತು. ಮಲ್ಲಿಕಾಳನ್ನು (ಮೈಸೂರ್ ಪಾಕ್ ಎಂದೇ ಮತ್ತೆ ಹೇಳ