Posts

Showing posts from 2016

ಕೋತಿಗಳ ಬಿಗ್ ಬಾಸ್ ಮನೆ ಕಥೆ

      ನನ್ನ ಹುಡುಗಿಗೆ ಕಥೆ ಕೇಳೋ ಗೀಳು, ಯಾವಾಗ ಸಿಕ್ಕಿದ್ರೂ  ಕಥೆ ಹೇಳೆಂದು ಪೀಡಿಸುತ್ತಿದ್ಲು. ನನ್ನಲ್ಲಿದ್ದ ಚಂದಮಾಮ ಕಥೆಗಳೆಲ್ಲಾ ಖಾಲಿಯಾಗಿದ್ವು, ಈ ಬಾರಿ ಸಿಕ್ಕಾಗಲೂ ಕಥೆ ಹೇಳು ಎಂದು ಕೇಳಿದರೆ ಯಾವ ಕಥೆ ಹೇಳಲಿ ಎಂಬ ಚಿಂತೆ, ಸರಿ ನನ್ನ ಬಳಿ ಒಂದು ಕಥೆಯಿದೆ, ಅದನ್ನೇ ಅವಳಿಗೆ ಹೇಳಲಾ? ಮೊದಲು ನಿಮಗೆ ಕಥೆ ಹೇಳುವೆ, ಚೆನ್ನಾಗಿದ್ರೆ ಹೇಳಿ ಇದನ್ನೇ ಅವಳಿಗೆ ಹೇಳ್ತೀನಿ.       ಒಂದು  ಕೋಣೆಯಲ್ಲಿ ಒಟ್ಟು ಎಂಟು ಕೋತಿಗಳನ್ನು ಕೂಡಿ ಹಾಕಲಾಯಿತು, ಸೇಮ್ ನಮ್ಮ ಬಿಗ್‍ಬಾಸ್ ಮನೇ ಥರ. ಒಂದು ಟ್ವಿಸ್ಟ್ ಬೇಕಲ್ಲಾ, ಮನೆ ಛಾವಣಿಯ ಮೇಲೆ ಒಂದು ಹಣ್ನಾದ ಬಾಳೆಗೊನೆಯನ್ನು ತೂಗಿ ಹಾಕಲಾಯಿತು. ಬಾಳೆಗೊನೆ ತೂಗಿ ಹಾಕಿದ್ರೆ ಆಯ್ತಾ? ಕೋತಿಗಳಿಗೆ ಹತ್ತಲಿಕ್ಕಾಗ್ಲಿ ಅಂತಾ ಒಂದು ಹಗ್ಗವನ್ನೂ ಜೋತು ಬಿಡಲಾಯ್ತು.     ಬಾಲೆಗೊನೆ ಕಂಡ ಕೋತಿಗಳು ಸುಮ್ಮನೇ ಕುಳಿತುಕೊಳ್ಳೋಕೆ ಸಾಧ್ಯಾನಾ? ಕಣ್ಣೆದುರೇ ಬಾಳೆಗೊನೆ, ತಿನ್ನೋಕೆ ಸುಲಭವಾಗ್ಲಿ ಅಂತಾ ಜೋತುಬಿದ್ದಿರೋ ಹಗ್ಗ! ಖುಷಿಯಿಂದ ಒಂದು ಕೋತಿ ಹಗ್ಗ ಹಿಡಿದು ಮೇಲೇರೆಬಿಟ್ತು. ಇನ್ನೇನು ಬಾಳೇಹಣ್ಣಿಗೆ ಬಾಯಿ ಹಾಕಿಬಿಟ್ತು ಅಂದಾಗ್ಳೇ ಮತ್ತೊಂದು ಕೋತಿ ಅದರ ಬಾಲ ಹಿಡಿದು ಜಗ್ಗೇ ಬಿಟ್ತು! ಬಾಕಿ ಕೋತಿಗಳು ಸುಮ್ಮನಿರಬೇಕಲ್ವಾ, ಅವೆಲ್ಲಾ ಸೇರಿ ಮೊದಲನೇ ಕೋತಿಗೆ ಹೊಡೆಯಹತ್ತಿದವು. ನಮ್ಮೆದುರೇ ಬೇರೆಯವ್ರು ಉದ್ದಾರ ಆದ್ರೆ ಸಹಿಸಲಾಗುತ್ತಾ?      ಮೊದಲನೇ ಕೋತಿಗೆ ತಾನ್ಯಾಕೆ ಹೊಡೆತ ತಿಂದೆ ಅಂತಾನೂ ಗೊತ್ತಾಗ್ಲಿಲ

ಗುಬ್ಬಕ್ಕನ ಕಥೆ

              ಅಮ್ಮ ನನಗೆ ಹೇಳಿದ ಎಲ್ಲಾ ಕಥೆಗಳೂ “ಒಂದಲ್ಲಾ ಒಂದೂರಲ್ಲಿ...” ಎಂದೇ ಶುರುವಾಗ್ತಿತ್ತು. ಆ ಕಥೆಗಳಲ್ಲೆಲ್ಲಾ ಇಣುಕುತ್ತಿದ್ದ ಕಾಗಕ್ಕ ಗುಬ್ಬಕ್ಕನ ಪಾತ್ರಗಳು ನನಗೆ ಖುಷಿ ಕೊಡ್ತಿದ್ವು ಆಗೊಂದು-ಈಗೊಂದು ಕಥೆಗಳಲ್ಲಿ ರಾಜ ರಾಣಿಯರ ಪ್ರವೇಶವೂ ಆಗ್ತಿತ್ತು.ಈಗ ನಾನೂ ಕಥೆ ಹೇಳುವ ವಯಸ್ಸಿನ ಆಸುಪಾಸಿನಲ್ಲಿದ್ದೇನೆ, ನನ್ನ ಮಕ್ಕಳಿಗೆ ಯಾವ ಕಥೆ ಹೇಳಲಿ? ನನ್ನ ಬಳಿ ಮಕ್ಕಳಿಗೆ ಹೇಳಲು ಕಥೆ ಇಲ್ಲ, ನಿಮಗೆ ಹೇಳೋಕೆ ಒಂದು ಕಥೆ ನನ್ನ ಹತ್ತಿರ ಇದೆ. ಈ ಕಥೆಯಲ್ಲಿ ಪಾತ್ರಗಳಿವೆ, ಮುಗ್ದ ಗುಬ್ಬಕ್ಕನೂ ಇದ್ದಾಳೆ,ಮೋಸಗಾತಿ ಕಾಗಕ್ಕನೋ ಇದ್ದಾಳೆ. ಬಿಳಿ ಕುದುರೆ ಏರಿ ಬರುವ ರಾಜಕುಮಾರ, ಹಗಲಿಡೀ ಸ್ವಪ್ನ ಕಾಣುವ ರಾಜಕುಮಾರಿಯೂ ಇದ್ದಾಳೆ...           ಎಷ್ಟೋ ರಾತ್ರಿಗಳ ಆಕ್ರಂದನ ನಾಲ್ಕು ಗೋಡೆಗಳ ನಡುವಿನ ಮತ್ತೊಂದು ಜೀವಕ್ಕೆ ಖುಷಿ ಕೊಡುತ್ತಿತ್ತು. ಯಾವುದೇ ಪಿತ್ರಾರ್ಜಿತ ಆಸ್ತಿಯಿಲ್ಲದ ಅವಳು,ಕನಿಷ್ಠ ಎಂಟನೇ ಕ್ಲಾಸಿನ ಕನ್ನಡ ಪುಸ್ತಕವನ್ನೂ ಓದಲು ತಿಣಕಾಡುತ್ತಿದ್ದ ಅವಳಿಗೆ ಹೆಣ್ಣೆಂಬ ಹಣೆಪಟ್ಟಿಯೊಂದೇ ಜೀವಕ್ಕಿದ್ದ ಅರ್ಹತೆಯಾಗಿತ್ತು. ಯಾರೋ ತಂದೆ-ತಾಯಿಯರೆಂಬ ಅಪರಿಚಿತರು ಕರುಣಿಸಿದ್ದ ಜೀವವನ್ನು ಬದುಕಿಸಿಕೊಳ್ಳಲು ಗುಬ್ಬಕ್ಕನಿಗಿದ್ದುದು ಅದೊಂದೇ ದಾರಿ. ಚಿಕ್ಕ ವಯಸ್ಸಿಗೇ ಕಾÀಗಕ್ಕನ ಸೆರೆಯಾಳಾಗಿದ್ದ ಇವಳ ಸೌಂದರ್ಯ ಅದೆಷ್ಟೋ ಗಿರಾಕಿಗಳಿಂದ ಸೂರೆಯಾಗಿತ್ತು.        ಹಗಲಲಿ ಊರ ವಿಪ್ರರಿಗೆ        ಅಸ್ಪರ್ಷೆ,        ರಾತ್ರಿರಾ

ಕಾಫಿ ವಿಥ್ ಪ್ರೆಂಡ್

        ಮೊನ್ನೆ ಸಂಜೆ ಅಪರೂಪವೆಂಬಂತೆ ನನ್ನ ಗೆಳೆಯ ಮನೆಗೆ ಬಂದಿದ್ದ. ನನಗಿಂತ ಚೂರು ಜಾಸ್ತಿಯೇ ಓದಿದ್ದ ಆತ ಬುದ್ದಿಯಲ್ಲೂ ನನಗಿಂತ ಚುರುಕು. ಅಡುಗೇ ಮನೆಯಲ್ಲಿ ಏನಾದರೂ ತಿನ್ನೋಕಿದ್ಯಾ ಅಂತ ನೋಡೋಕೆ ಇಬ್ರೂ ಒಳಹೊಕ್ವಿ.       ತಿನ್ನೋಕೆ ಏನೂ ಕಾಣಲಿಲ್ಲ, ಸರಿ ಕಾಪಿ ಕುಡಿಯೋ ಚಟ ಹತ್ತಿತು. ಸರಿ ನಾನು ಕಾಫಿ ಮಾಡೋಕೆ ರೆಡಿಯಾದೆ. ಇವನಿಗೋ ಮಾತಿನ ತೆವಲು ಚೂರು ಜಾಸ್ತೀನೇ, ಇವತ್ತು ಯಾಕೋ ಸಮಾಜದ ಉದ್ದಾರದತ್ತ ಇವನ ಚಿತ್ತ ನೆಟ್ಟಂತಿತ್ತು. ನಮ್ಮ ಸಂಸ್ಕøತಿಯ ಶುದ್ದೀಕರಣದತ್ತ ಮಾತು ಹರಿಸತೊಡಗಿದ.       ನಮ್ಮ ಭಾರತೀಯ ಸಂಸ್ಕøತಿ ಜಗತ್ತಿನಲ್ಲೇ ಶ್ರೇಷ್ಠವಾದದ್ದು, ಆದರೆ ಮೂಲ ಸಂಸ್ಕøತಿ ನಾಶವಾಗಿ ಅನೇಕ ಸಂಸ್ಕøತಿಗಳ ಮಿಶ್ರಣದಿಂದಾಗಿ ಅಶುದ್ದವಾಗಿದೆ. ನಮ್ಮ ಜನ ಮನಸ್ಸು ಮಾಡಿದರೆ ಮಾತ್ರ ನಮ್ಮ ಸಂಸ್ಕøತಿ ಉಳಿಯುತ್ತದೆ...ಮತ್ತೆ ಮೊದಲಿನಂತೆ ನಮ್ಮ ಸಂಸ್ಕøತಿ ಉತ್ತುಂಗಕ್ಕೇರುತ್ತದೆ ಎನ್ನುತ್ತಿದ್ದ. ನಾನು ಬಿಸಿ ಹಾಲಿಗೆ ಕಾಫಿ ಪುಡಿ ಹಾಕಿದೆ.     ಪಾಶ್ಚಿಮಾತ್ಯರ ಅಂಧಾನುಕರಣೆಯಿಂದ ಸೀರೆ, ಪಂಚೆಗಳ ಜಾಗವನ್ನು ಜೀನ್ಸ್, ಟೀಶರ್ಟ್ ಆಕ್ರಮಿಸಿವೆ. ಭರತದಲ್ಲಿ ಇಂತಹ ಬಟ್ಟೆಗಳನ್ನು ನಿಶೇಧ ಮಾಡಬೇಕು ಎಂದ. ಅಷ್ಟೊತ್ತಿಗೆ ಕಾಫೀ ಪುಡಿ ಹಾಲಿನೊಂದಿಗೆ ಬೆರೆತು ಒಳ್ಳೆಯ ಘಮ ಹರಡಿತ್ತು. ಅದಕ್ಕೊಂದಿಷ್ಟು ಸಕ್ಕರೆ ಬೆರೆಸಿ ಕಪ್‍ಗೆ ಬೆರೆಸಿ ನಾನೊಂದು ಅವನೊಂದು ಕಪ್ ಕೈಲಿಟ್ಟುಕೊಂಡ್ವಿ.     ಅಷ್ಟರಲ್ಲಿ ಅವನ ಆರೋಪ ನನ್ನ ಮೇಲೆ ಎರಗಿತ್ತು. ನೀನು ನ

ನೀ ಕೊಡದ ಮುತ್ತು ಕೆನ್ನೆ ತುಂಬ...

ಬಹುಶಃ ನಾ ಬರೆದ ಮೊದಲ  ಹಲ್ಬಾಣ  ಇದೇ ಆಗಿರ್ಬೇಕು ಓದಿಬಿಡಿ.      ಈ ಮೂರು ವರ್ಷಗಳಲ್ಲಿ ಅದೆಷ್ಟು ಲವ್ವುಗಳಾದ್ವೋ ಅದೆಷ್ಟು ಬ್ರೇಕಪ್ಪುಗಳಾದ್ವೋ ಅ ದೇವರಿಗೇ ಗೊತ್ತು. ಅದರೆ ಎಷ್ಟು ಲವ್ವುಗಳಾದ್ವೋ ಅಷ್ಟೇ ಬ್ರೇಕಪ್ಪುಗಳಾಗಿದ್ದಂತೂ ಸತ್ಯ. ಮೊದಲ ಪ್ರೇಮ, ಮೊದಲ ಸ್ಪರ್ಷ, ಮೊದಲ ನೋಟ, ಮೊದಲ ಅಪ್ಪುಗೆ... ಮೊದಲ ಬ್ರೇಕಪ್... ಇವನ್ನೆಲ್ಲಾ ಮರೆಯೋದು ಅಷ್ಟು ಸುಲಭವಲ್ಲ ಬಿಡಿ. ನನಗೆ ಮೊದಲ ಪ್ರೆಮದ ನಿಶಾನೆಯಾಗಿ ಏನೂ ಉಳಿದಿಲ್ಲ, ಆದರೆ ಮೊದಲ ವಿದಾಯದ ಕುರುಹಾಗಿ ಉಳಿದಿರೋದು ಇದೊಂದೇ ಪತ್ರ, ಪೋಸ್ಟ್ ಮಾಡದೇ ಬರೀ ಬರೆದಿಟ್ಟ ಪತ್ರ...     ಏಯ್ ನಿರ್ಲಜ್ಜ ಹುಡುಗಿ,         ನೆನಪುಗಳಿಗೆ ಸಾವಿಲ್ಲ ಎಂದು ಗೊತ್ತಿತ್ತು, ಆದರೆ ರಜಾನೂ ಇಲ್ಲ ಅಂತ ತಿಳಿದಿದ್ದು ಈಗಲೇ, ನೀನು ಬಿಟ್ಟು ಹೋದಮೇಲೇ... ಹುಣ್ಣಿಮೆಯ ಚಂದಿರ ಆಗಸದಲ್ಲಿ ನಕ್ಕಾಗ ನಿನ್ನ ನಗು ನೆನಪಾದರೆ, ಅಮಾವಾಸ್ಯೆಯ ಕತ್ತಲು ಕಂಡಾಗ ಜೊತೆಯಲ್ಲಿ ನೀನಿಲ್ಲ ಎಂಬ ನೆನಪಾಗಿ ಮರಗುತ್ತೇನೆ. ನಂಗೊತ್ತು, ನೀನು ನನ್ನ ಮರೆತಿದ್ದೀಯ ಅಂತ, ನನ್ನ ಮರೆತು ಹಾಯಾಗಿದ್ದೀಯಾ ಅಂತಾನೂ ಗೊತ್ತು ಗೆಳತಿ. ಕನ್ನಡ ಚಿತ್ರಗಳನ್ನು ನೋಡಿ ಬೆಳೆದ ನನ್ನಂಥಾ ಪ್ರೇಮಿಗಳು ನಿನ್ನ ಖುಷಿಯೇ ನನ್ನ ಪ್ರೀತಿಯ ಧ್ಯೇಯ ಎಂದು ತಿಳಿಯೋದು ಪ್ರೇಮ ಧರ್ಮವಲ್ಲವಾ ಗೆಳತಿ...     ನಾನು ಹೇಗಿದ್ದೀನಿ ಅಂತಾ ಕೇಳಿದೆಯಾ ಗೆಳತಿ? ನಾನೂ ಖುಷಿಯಾಗಿದ್ದೇನೆ ಬಿಡು. ಸಾಕ್ಷಿ ಬೇಕಾದರೆ ಬಂದು ನನ್ನ ಕಣ್ಣೀರ ನೋಡು. ಬೇಡ, ನನ್ನ ಕಣ

ಒಂದಿಷ್ಟು ಪುಟಿಕಥೆಗಳು...

‪‎ ಸಾಕ್ಷಾತ್ಕಾರ‬ ದೇವರು ಎಲ್ಲಿದ್ದಾನೆ? ಹುಡುಕದೆಯೇ ಹಿರಣ್ಯಕಶ್ಯಪುವಿಗೆ ಕಂಡನಂತೆ! ಅದೂ ಯಾವುದೋ ಭಕ್ತ ಬರೆದ ಕಥೆಯಲ್ಲವೇ? ಬರೆದವರೆಲ್ಲ ಕಥಾನಾಯಕನನ್ನು ದೇವರೆಂದೋ, ದೇವರೇ ನಾಯಕನೆಂದೋ ಬರೆದಿರುತ್ತಾರೆ ಬಿಡಿ. ನಾನು ಯಾರೋ ಬರೆದಿಟ್ಟ ಕಥೆಯ ನಾಯಕನ ಹುಡುಕಾಟದಲ್ಲಿಲ್ಲ, ಆ ಶಕ್ತಿಯನ್ನು ಹುಡುಕುತ್ತಿದ್ದೇನೆ. ಆ ಮಹಾಶಕ್ತಿ ಇಂತಹ ಶುಭ್ರ ಹಿಮಾಲಯದಲ್ಲಿರದೇ ಮತ್ತೆಲ್ಲಿರುತ್ತಾನೆ? ಇಲ್ಲ, ಇಲ್ಲಿಯೂ ಆ ಚೇತನವಿಲ್ಲ! ಇದು ಬರೀ ಬೆಳಕಿನ ಜಾಗ, ಬರೀ ಚಳಿಯ ಜಾಗ ಇಲ್ಲಿ ಹಸಿರೂ ಚಿಗುರುವುದಿಲ್ಲ ಇನ್ನೆಂತಹ ಚೇತನವಿದ್ದೀತು! ಪರಮಾರ್ಥ ಕಾಣಲು ಹೋದವ ಮರಳಿ ಬಂದ. ಬಂದವನಿಗೆ ಎಲ್ಲ ಕೇಳಿದರು,ಸಾಕ್ಷಾತ್ಕಾರವಾಯಿತಾ? ಇವನೇನಂದ?  "ನಿಮ್ಮ ದೇವರು ಸಿಕ್ಕಿದ್ದ, ನನ್ನ ಕಂಡು ಕೈಮುಗಿದು ಹುಡುಕಿ ಕಾಟಕೊಡಬೇಡಿ ಏನೇ ಆದರೂ ನಾನಿರುವೆ...ಅಂದ" ********************************************** ಅವನಿಗೆ ಒಂದಷ್ಟು ಬ್ರೇಕಪ್ಪುಗಳಾಗಿದ್ವು. ಅವನ ಗಡ್ಡದ ಹೇರ್ ಸ್ಟೈಲ್ ನೋಡಿದವರ ಮನಸ್ಸಲ್ಲಿ ಆ ಯೋಚನೆ ದೃಢವಾಗ್ತಿತ್ತು. ಹಿಂಗೇ ನಮ್ಮ ನಿಮ್ಮಂಗೇ ಸಾಮಾಜಿಕ ಜಾಲತಾಣದಲ್ಲಿ (   ) ಸಕ್ರಿಯನಾಗಿದ್ದವನಿಗೆ ಹೊಸತಾಗಿ ಪರಿಚಯವಾದ ಹುಡುಗಿಯರು ಕೇಳೋ ಪ್ರಶ್ನೆ ಹಳೆ ಹುಡುಗಿಯ ಹೆಸರೇನು? ಅವನೇನೋ ಉತ್ತರ ಹೇಳುತ್ತಿದ್ದ ಬಿಡಿ ಅವನಿಗೇನು! ‪‎ ಪ್ರತೀಕಾರ‬ ! ಆವತ್ತೊಂದಿನ ಬಂದ ಸುಂದರಿಯೊಬ್ಬಳ ಮೆಸೇಜು ನಿದ್ದೆ ಕೆಡಿಸಿತ್ತು. ಅದೇ ಹೆಸರು, ಹಳೆ ಹುಡುಗಿಯದು! 

ಆತ್ಮಗಮನೆ

         ಕುಮಟಾ, ಅಂಥಾ ದೂರದೂರೇನಲ್ಲ ನನ್ನೂರಿಂದ. ಅಂಥಾ ಪ್ರೇಕ್ಷಣೀಯ ಪಟ್ಟಣವಾಗ್ಲೀ, ಆಕರ್ಷಕ ನಗರವಾಗ್ಲೀ ಅಲ್ಲ. ಆದರೆ, ನಂಗೊಂಥರಾ ಸೆಳೆತ ಆ ಊರೆಂದರೆ‌. ಪ್ರತೀಬಾರಿ ಹೋದಾಗಲೂ ಒಂಥರಾ ರಿಪ್ರೆಷ್ಷಾಗಿ ಬರ್ತೀನಿ, ಇಲ್ಲೆಲ್ಲೋ ಕಳೆದು ಹೋದ ನಾನು ಅಲ್ಲೆಲ್ಲಿಂದಲೋ ಪತ್ತೆಯಾಗುವ ಕ್ರಿಯೆಯೇ ಕುಮಟಾ ಆಗಿರ್ಬೋದು.         ಸಖತ್ತ್ ಬೋರಿಂಗ್ ಲೀಡ್ ಅಲ್ವಾ? ಇರ್ಲಿ ಬಿಡಿ‌. ನಂಗೆ ಕುಮಟಾ ಪೇಟೆಗಿಂತಾ ಶಿರಸಿಯಿಂದ ಕುಮಟಾವನ್ನ ಸೇರಿಸೋ ರಸ್ತೆ, ಆ ಪಯಣವೇ ಇಷ್ಟ‌.‌‌‌‌ ಹಿಂಗಂದ್ರೆ ಹಿಂಗೇ ನಿಶ್ಚಲ ನಾನು ಚಲಿಸೋಕೆ ಶುರು ಮಾಡ್ತೀನಿ. ಅಮ್ಮೀನಳ್ಳಿ ಗೊತ್ತಾ ನಿಮಗೆ? ಅಲ್ಲೇ, ಚೂರು ಒಳಗಡೆ ನನ್ನ ಅಮ್ಮನ ತವರೂರಿದೆ. ಇತ್ತು, ನನ್ನ ಸೋದರಮಾವಂದಿರೆಲ್ಲಾ ಹಿಸೆಯಾಗಿ ಪಟ್ಟಣ ಸೇರುವುದರೊಂದಿಗೆ ಇಲ್ಲವಾಯ್ತು‌. ಅಜ್ಜಿಯ ಮೊದಲ ತಿಥಿಯೇ ಅಲ್ಲಿಗೆ ನನ್ನ ಕೊನೇ ಭೇಟಿಯಾಗಿತ್ತು, ಏಳೆಂಟು ವರ್ಷಗಳ ಹಿಂದಿನ ಮಾತದು ಈಗ್ಯಾಕೆ ಬಿಡಿ. ಹಾ, ಕುಮಟಾ ರಸ್ತೆ ಇಷ್ಟವಾಗೋದು ಇಂಥದೇ ಮರೆತು ಹೋದ ನನ್ನವರ ನೆನಪಿಂದ‌. ಮೊದಲ ಹುಡುಗಿಯ ತವರೂ ಆ ಕಡೆಗೇ ಅನ್ನೋದು ನೆನಪಾದರೂ ಮರೆಯಬಲ್ಲ ವಿಷಯ.           ಆಗೆಲ್ಲಾ ನಾನು ಬಿ.ಕಾಂ‌. ಓದುತ್ತಿದ್ದ ಸಮಯ. ವೆಂಕ,ನಂದು, ರವಿ ಮತ್ತೆ ನಾನು ಮೂಡು ಬಂತೆಂದ್ರೆ ಹಂಗೇ ಗಾಡಿ ಹತ್ತಿ ಉಂಚಳ್ಳಿ ಫಾಲ್ಸಿಗೋ, ಬೆಣ್ಣೆ ಫಾಲ್ಸಿಗೋ ಹೋಗುತ್ತಿದ್ದದುಂಟು. ಈಗ ಅವ್ರೆಲ್ಲಾ ಎಲ್ಲಿ? ನಾನೇಕೆ ಇನ್ನೂ ಇಲ್ಲೇ ಇದೀನಿ? ಹಿಂಗೆಲ್ಲಾ ಅಸಂಬದ್ಧ ಪ್ರಶ್ನ

ನರ್ಸಜ್ಜನ 'ಖತ್ರಿ'

                                   ನಾನು ದಿನಾ ಬಸ್ಸಲ್ಲಿ ಹೋಗ್ಬೇಕಾದ್ರೆ, ರುದ್ರಮೂಲೆಯನ್ನೋ ಆ ಊರ ಒಂಟಿಮನೆ,ಮನೆಯ ಮುಂದಿನ ಅಂಗಡಿ, ಅಂಗಡಿಯ ಮುಂದೆ ಬಸ್ಸನ್ನು ನೋಡ್ತಾ ನಿಂತ್ಕೊಳ್ಳೋ ಆ ಅಜ್ಜ ತುಂಬಾನೇ ಕುತೂಹಲ ಹುಟ್ಟಿಸೋ ಆಕೃತಿಗಳಾಗಿದ್ವು. ಊರು ಬಿಟ್ಟು ಬಂದ್ಮೇಲೆ ಆ ದಾರಿಯಲ್ಲಿ ಹೋಗಿದ್ದೇ ಕಡಿಮೆಯಾಗಿ ಅವೆಲ್ಲಾ ಮೆದುಳಿನ ಸುರುಳಿಗಳ ಮಧ್ಯೆ ಅಜೀರ್ಣವಾಗಿ ನೆನಪಾಗದಂತೇ ಉಳಿದುಬಿಟ್ಟಿದ್ವು. ಅದ್ಯಾವತ್ತೋ ಯಾರದೋ ಬಾಯಿಯಲ್ಲಿ ಆ 'ಖತ್ರಿ ಅಂಗಡಿ'ಯ ಕಥೆಯಂತಾ ಸುದ್ದಿ ಕೇಳೋವರೆಗೂ.       ನರ್ಸಜ್ಜ,ಅಂಥದ್ದೇ ಎಂಥದೋ ಹೆಸರು ಆ ಅಜ್ಜಂದು ಸರಿಯಾಗಿ ಜ್ಞಾಪಕವಿಲ್ಲ. ಯಾರೂ ಸುಳಿಯದ ಆ ಮೂಲೆಯಲ್ಲಿ ಅದೇಕೆ ಅಂಗಡಿಯಿಟ್ಟಿದ್ನೋ, ಅದೊಂದು ನಿಗೂಢವೇ ಸೈ. ಆಗ್ಲೇ ಎಪ್ಪತ್ತರ ಹತ್ತಿರದ ಪ್ರಾಯ. ಅಂಗಡಿಯ ಖಾಲಿಯಾಗದ ಸಾಮಾನುಗಳ ಅವಧಿ ಮುಗಿದ ನಂತರ ಅಂಗಡಿಯನ್ನ ಅದೆಂಗೆ ತುಂಬಿಡ್ತಿದ್ನೋ, ಅದು ಮತ್ತೊಂದು ನಿಗೂಢ. ಆತ ಬಸ್ಸಿಗೆ ಬಂದದ್ದಂತೂ ನಾನು ನೋಡಿಲ್ಲ. ಅಂತಾ ನರ್ಸಜ್ಜನ ಖತ್ರಿ ಅಂಗಡಿಯು ಈಗಲೂ ಇದೆ. ಗೋಡೆಯಿದೆ,ಬಾಗಿಲಿಲ್ಲ. ರೀಪು-ಪಕಾಸುಗಳ ಒಪ್ಪವಾದ ಅಲಂಕಾರವಿದೆ, ಛಾವಣಿಯಿಲ್ಲ. ಆ ಅಜ್ಜ?        ಎರಡು ವರ್ಷಗಳ ಹಿಂದಂತೆ,             ಯಾವತ್ತೂ ಜಲಜಾಕ್ಷಿಯಂಥದೊಂದು ಹೆಸರಿರಬಹುದಾದ, ನರ್ಸಜ್ಜನೆಂಬ ಅಜ್ಜ ಅಂಗಡಿಕಾರನ ಹೆಂಡತಿ ಕೊಟ್ಟಿಗೆ ಕೆಲಸವನ್ನೆಲ್ಲಾ ಮಾಡಿ ಚಾ ಮಾಡಿ ಗಂಡನಿಗೆ ಕೊಟ್ಟದ್ದರಿಂದ ಶುರುವಾಗಿತ್ತಿತ್ತು ನರ್

ಹಂಡ್ಗೆಡುಕ

            ಮಕ್ಕಳಿಗೆಲ್ಲಾ ಕೈತುಂಬ ಕೆಲಸ. ಅದ್ಯಾಕೋ ಊರ ಕಡೆಯ ಸೆಳೆತ ಜಾಸ್ತಿಯಾಗಿತ್ತು,ಇತ್ತೀಚೆಗೆ. ಇತ್ತೀಚೆಗೆ ಅಂದ್ರೆ ಮೊನ್ನೆಯಿಂದ, ಹೊತ್ತು ಖಾಲೀ ಮಲಗಿದ್ದಾಗ ಎಚ್ಚರಿಸಿ ಕಂಡ ಆ ಚಿತ್ರದಿಂದ.      ಜಾಸ್ತಿ ದಿನ ತಡೆದುಕೊಳ್ಳೋಕೆ ಆಗಲಿಲ್ಲ. ಬಿಟ್ಟು ಬಂದಿದ್ದ ಅದೇ ಹಳೆ ಊರಿಗೆ, ರಂಗನಾಥ ಎ.ಎಸ್. ಎಂಬ ಹೆಸರಿನ ಎಸ್ ಅಕ್ಷರದ ಹುಟ್ಟಿಗೆ ಕಾರಣವಾದ ಊರಿಗೆ, ಸಣ್ಣಳ್ಳಿಗೆ ಬಂದೇಬಿಟ್ಟಿದ್ದ. ಹಳೇಮನೆ, ತೋಟ ನೋಡಿಕೊಳ್ಳುತ್ತಿದ್ದ ಅಣ್ಣನ ಮಗ ರಾಮು ಇವನು ಬಂದ ದಿನವೇ ಮನೆ ಖಾಲಿ ಮಾಡಿಕೊಡುತ್ತಿದ್ದನೇನೋ, ಒಬ್ಬಂಟಿ ಇವನಿಗಾದರೂ ಹೊತ್ತು ಕಳೆಯಬೇಕಲ್ಲ! ಬೇಡ ಅಂದಿದ್ದ. ಇಲ್ಲ, ಇಲ್ಲೇ ಇರು ಅಂದಿದ್ದ.          ರಾಮನಿಗೆ ಒಬ್ಬಳು ಹೆಂಡತಿ, ಸುಗುಣೆ,ಸುಶೀಲೆ, ಸಾಧ್ವಿ ಅಂತೆಲ್ಲ ಕರೆಯಲಾಗದಿದ್ದರೂ ಗಂಡನ ಚಿಕ್ಕಪ್ಪ ಮರಳಿ ಬಂದನೆಂದು ಗಂಡನ ಬಳಿ ' ಜಮೀನನ್ನು ಇಷ್ಟು ವರ್ಷ ನೋಡಿಕೊಂಡಿರಿ, ಈಗ ಬಿಟ್ಟುಬಿಡುವಿರಾ' ಎಂದೆಲ್ಲಾ ಕೂಗಾಡಿ ತಲೆಕೆಡಿಸುವಷ್ಟು ನಾಗರಿಕ ಹೆಣ್ಣಲ್ಲ. ಹೆಸರು ನನಗೆ ನೆನಪಿಲ್ಲ, ರಂಗನಾಥ ಅದೇನೋ ಹೆಸರು ಅಂದಿದ್ದ ಅಂತಷ್ಟೇ ಗೊತ್ತು. ಈ ಶ್ರೀ ಮತ್ತು ಶ್ರೀಮತಿ ರಾಮರಿಗೆ ಒಬ್ಬ ಮಗ, ಶರತನೋ ಭರತನೋ ಯಾರೋ ಒಬ್ಬ. ತಾಲೂಕು ಕೇಂದ್ರದ ಯಾವುದೋ ಕಾಲೇಜಿನಲ್ಲಿ ಮಾಸ್ತರನಂತೆ, ಊರು ದೂರವಾದ್ದರಿಂದ ಅಲ್ಲೇ ಬಾಡಿಗೆ ರೂಮಿನಲ್ಲಿ ಉಳಿಯುತ್ತಾನಂತೆ.           ಒಂದೆರಡು ದಿನ ತೋಟವನ್ನೆಲ್ಲಾ ತಿರುಗಿ ಪರಿಚಯಿಸಿಕೊಂಡದ್ದಾಯ್ತು.

ಖಾಲಿ ಕಾ೧

Image
ಎಲ್ಲ ಬರೆದಂತೆ ನಾನೂ ಬರೆಯುವೆ ಪದ್ಯವ, ಘರ್ಷಣೆಯದು, ಸಂಘರ್ಷದ್ದು ಉಚ್ಚೆವಾಸನೆಯ ಇತಿಹಾಸದ್ದು... ನನ್ನದೇ ಸೆಂಟೊಡೆದ ಬದುಕಿನದು. ಯಾರ ಹೆಸರಿಡಲಿ ಮೊದಲ ಸಾಲಿನಲಿ? ಶುರುವಾಗಲಿ ಅವನಿಂದ, ಮೇಲಿರುವನೆಂದು ಜನರನ್ನೋ ನಾ ನಂಬದ ದೇವನಿಗೇ ಥೂ, ಉಗಿದೆ... ಬಿತ್ತು, ಅಂಗವಸ್ತ್ರದ ಅಂಚಿನಲೇ ಒರೆಸಿದೆ ಮುಖವ. ಯಾರಂದು ಏನ ಮಾಡಲಿ? ನನ್ನ ಬದುಕಿದು, ನನ್ನದೇ ಪದ್ಯ. ಸುತ್ತೊಡೆದ ಭೂಮಿಯಲಿ ನಾನಿಬ್ಬನಿರುವೆ, ಎಲ್ಲ ಮರೆತಂತೇ. ನಾ ಕೆಟ್ಟವ ನೆನಪುಳಿದಂತೆ, ಚರಿತ್ರೆಯದು ಖಾಲಿ ಪುಸ್ತಕ.ಚೊ ಎಲ್ಲ ಬರೆದಂತೆ ನಾನೂ ಬರೆವೆ ಪದ್ಯವ, ಜಗಕೆ ಹೇಳುವುದಿದೆ ಕೂಗಿ, ನಾ ಹುಟ್ಟಾಕೆಟ್ಟವನಲ್ಲ ಕೆಟ್ಟೂ ಹುಟ್ಟಿದವನಲ್ಲ, ಹುಟ್ಟಿ ಕೆಟ್ಟವನು ಬೆಳೆದು ಕೆಡಿಸಲ್ಪಟ್ಟವನು...😊

ಶುರು

  ಮಧ್ಯಾಹ್ನ ನಿದ್ರೆ ಜಾಸ್ತಿಯಾಯ್ತು, ಈಗ ನಿದ್ರೆ ಬರ್ತಿಲ್ಲ.  ಹಿಂಗೇ ನ್ಯೂಸ್ ಪೀಡೆಯ ಬುಡ ಕಾಣುತ್ತೇನೋ ಅಂತ ನೋಡ್ತಿದ್ದೆ...ನಾಲ್ಕೈದು ಹಳೆ ಸ್ನೇಹಿತರು ಯಾವತ್ತೋ ಬದಲಿಸಿದ ಪ್ರೊಫೈಲ್ ಪಿಕ್ಚರ್ರುಗಳು ಕಂಡ್ವು.      ಬಹುತೇಕ ಎಲ್ಲರ ಡೀಪಿಗಳು ಪಾರ್ಮಲ್ ಅಂಗಿಗಳ ಒಳಗೆ ಅವರನ್ನ ಅಡಗಿಸಿಟ್ಟಿದ್ವು. ಹೊಟ್ಟೆ ಚೂರೇಚೂರು ದೊಡ್ಡದಾದ್ರೂ ಅಂಗಿಯಿಂದ ಬಿಡುಗಡೆಯಾಗುತ್ತವೇನೋ ಅನ್ವಂಗಿದ್ವು. ಲೈಕ್ ಒತ್ತದೇ ಅವರ ಪ್ರೊಫೈಲುಗಳನ್ನ ಚೆಕ್ಕಿಸಿದೆ. ಎಲ್ಲರದೂ ಒಂದೋ ದೊಡ್ಡ ಕಂಪನಿಯಲ್ಲಿ ಚಿಕ್ಕ ಜಾಬ್, ಚಿಕ್ಕ ಕಂಪನಿಯಲ್ಲಿ ದೊಡ್ಡ ಜಾಬ್ ಅಥವಾ ದೊಡ್ಡ ಚಿಕ್ಕ ಕಂಪನಿಗಳಲ್ಲಿ ದೊಡ್ಡ ಚಿಕ್ಕ ಜಾಬ್ಗಳಲ್ಲಿ ಇರೋದಾಗಿ ತೋರಿಸ್ತಿದ್ವು. ಆಗ ಅನ್ನಿಸಿದ್ದು, ನಾನೂ ಇಷ್ಟೊತ್ತಿಗೆ ಹಿಂಗಿರ್ಬೇಕಾಗಿತ್ತು ಅಲ್ವಾ ಅಂತ.        ಆ ಕ್ಷಣಕ್ಕೆ ಹಂಗನ್ನಿಸಿದ್ರೂ...ಊಹೂಂ ಯಾವುದೋ ಕಲರ್ ಕಾಲರಿನ ಪಾರ್ಮಲ್ ಷರ್ಟಿಗಿಂತಾ ನನಗಿಷ್ಟವಾದ ಕಾಲರ್ಲೆಸ್ ಟೀ ಷರ್ಟನ್ನೇ ಹಾಕಿಕಿಳ್ತಿರೋ ನನಗೆ ಆತ್ಮ ತೃಪ್ತಿಯಿದೆ. ಹಂಗಂತ ಅವರಿಗಿಲ್ಲ ಅಂತಲ್ಲ, ಆ ಜಾಗದಲ್ಲಿ ನನ್ನನ್ನು ಕಲ್ಪಿಸಿಕೊಳ್ಳೋಕೆ ನನಗೆ ಅಸಾಧ್ಯ. ದೊಡ್ಡ ನಗರದಲ್ಲಿ ಬದುಕೋದೂ ನನ್ನಿಂದಾಗದ ಕೆಲಸ. ನನಗೆ ನನ್ನೊಬ್ಬನಿಗೇ ಕೇಳುವ ಎದೆಬಡಿತ ಇಷ್ಟವೇ ಹೊರತು ನನ್ನೊಳಗಿನ ಮಾತೂ ಕೇಳದ ನಗರದ ಗಲಾಟೆ ಊಹ್ಞೂಂ ಇಂಪಾಸಿಬಲ್.       ಒಂದು ಜಾಬಿಗಾಗಿ ಊರು ಬಿಟ್ಟು ಪರದೇಸಿಯಾಗಿ ಬದುಕೋದಿದೆಯಲ್ಲಾ, ಅದರಷ್ಟು ಯಾತನೆ ಕಲ್ಪಿತ ನೆಲದಲ್