Posts

Showing posts from January, 2021

ಕೈಗಾರಿಕಾ ಕ್ರಾಂತಿಯ ತೆಕ್ಕೆಯಲ್ಲಿ ಮಿಸುಕಾಡುವ ಕೃಷಿವಲಯದ ಸಾಧ್ಯತೆ

Image
ನಾ ವು ಆಗಾಗ ‘ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ’ ಅನ್ನೋ ಆರೋಪವನ್ನು ಕೇಳುತ್ತೇವೆ, ಮಾಡುತ್ತೇವೆ. ಆದರೆ ಈ ಆಧುನಿಕ ವೃದ್ಧಾಶ್ರಮಗಳ ನಿರ್ಮಾಣ ಹೇಗಾಯ್ತು ಅನ್ನುವ ಯೋಚನೆಗೆ ’ನಗರಗಳತ್ತ ಯುವಜನತೆಯ ವಲಸೆ’ ಎನ್ನುವ ಮೂರು ಪದಗಳ ಉತ್ತರವನ್ನು ನೀಡಿ ಸುಮ್ಮನಾಗುತ್ತಿದ್ದೇವಷ್ಟೆ. ಇದರ ಮೂಲ ಮತ್ತು ಪರಿಣಾಮ ನಮ್ಮ ಮೇಲ್ಮಟ್ಟದ ಊಹೆಗಳಲ್ಲಿ ಮೂಡದೇ ಉಳಿದುಬಿಡುತ್ತವೆ. ೧೯೬೦ರ ದಶಕದಲ್ಲಿ ಕೃಷಿ ಕ್ರಾಂತಿ ಎನ್ನುವ ಕ್ರಾಂತಿಯೊಂದಕ್ಕೆ ಭಾರತ ತನ್ನನ್ನ ದೂಡಿಕೊಂಡಿತಾದರೂ ಅದಕ್ಕೂ ಮೊದಲೇ, ಅಂದರೆ ಸ್ವಾತಂತ್ರ್ಯದ ಹೊತ್ತಿಗೆಲ್ಲಾ ಕೈಗಾರಿಕಾ ಕ್ರಾಂತಿಯೆಂಬುದರ ಮೂಲಕ ಹೊಸ ಉದ್ಯೋಗಗಳನ್ನು ತಯಾರಿಸಲಾಗಿತ್ತು. ಅದಕ್ಕೆ ಕನಿಷ್ಠ ವಿದ್ಯಾರ್ಹತೆ, ಕೌಶಲಗಳ ಮಾನದಂಡ ಆ ಕಾಲಕ್ಕೆ ನಿಗದಿಯಾಗದಿದ್ದರೂ ಕೌಶಲದ ಅವಶ್ಯಕತೆ ಇದ್ದೇ ಇತ್ತು. ನಾವು ಆರೋಪಿಸುವ ಮೆಕಾಲೆ ಶಿಕ್ಷಣ ಪದ್ಧತಿ ಅದಾಗಲೇ ರೂಢಿಯಲ್ಲಿದ್ದುದಲ್ಲದೆ ಅದರ ಅವಶ್ಯಕತೆಯನ್ನೂ ಸೃಷ್ಟಿಸಲಾಯ್ತು. ಇವೆಲ್ಲ ಸ್ವಾತಂತ್ರ್ಯೋತ್ತರ ಭಾರತವನ್ನು ಬಲಿಷ್ಠಗೊಳಿಸಲು ಅವಶ್ಯವೆಂಬ ನಂಬಿಕೆ ನಮ್ಮಲ್ಲಿ ಮೂಡಿದ್ದು ಬಹುಶಃ ೭೦-೮೦ರ ದಶಕದ ಸುಮಾರಿಗೆ. ಆರ್ಥಿಕತೆಯ ಜಾಗತಿಕ ಸ್ಥಾನಮಾನಗಳ ಸಂಪಾದನೆಗೋಸ್ಕರ ಭಾರತದ ಸರ್ಕಾರಗಳು ನಗರ ಸೃಷ್ಟಿಗೆ, ನಗರಗಳ ಆರ್ಥಿಕ ಸಾಬಲ್ಯಕ್ಕೆ, ಕೈಗಾರಿಕಾ ವಸಾಹತುಗಳ ಸಾಬಲ್ಯಕ್ಕೆ ಹಲವು ಯೋಜನೆಗಳನ್ನು ತಂದ ಪರಿಣಾಮವೇ ಈಗಿನ ಹಳ್ಳಿಗಳ ಸ್ಥಿತಿ. ಕಡಿಮೆ ಕೂಲಿದರಕ್ಕಾಗಿ ಹಳ್ಳಿಗರತ್ತ ದೃಷ್ಟಿ! ನಗರಗ